ಬಿಟ್ಟೇವಣ್ಣಾ ಬಹುಕೆಟ್ಟ ಬಣ

ಬಿಟ್ಟೇವಣ್ಣಾ ಬಹುಕೆಟ್ಟ ಬಣ || ಪ ||

ಹ್ಯಾವ ತೊಟ್ಟಾಕ್ಷಣ
ಜೀವಗುಟ್ಟು ಪ್ರಾಣ
ಮೋಹನಟ್ಟುತಣ
ಈ ಓಣಿಯೊಳಾಡುವ ದೇವರ ಸ್ಥಲ
ಕೇವಲ ಐಸುರದಲಾವಿಯ ಹಬ್ಬ ನಾವು || ೧ ||

ಏಳೆಂಟು ಹುಡುಗರೋ ಗೋಳಿಟ್ಟ ಎಡಗರು
ಕಾಳಕತ್ತಲದೊಳು ಕರದು ಕೇಳಲು ಸ್ವರ
ಏಳವಲ್ದು ಕಾಲು ಕೀಳವಲ್ದು ತಾಳಮ್ಯಾಳಸಲ್ದು
ನಾಳಿನ ದಿನ ಬರಬಾರದು ಇಲ್ಲಿಗೆ
ಗಾಳಿಗುದ್ದಿ ಮೈನೋಯಿಸಿಕೊಂಡೆಲ್ಲೋ ತಮ್ಮಾ || ೨ ||

ಸ್ವಾಮಿ ಇಮಾಮಹಸೇನಿ ಹುಸೇನಿಗೆ
ನಾಮಸ್ಮರಣೆಯನ್ನು ಮರೆತು ಮು೦ದಕ್ಕ ಹೆಜ್ಜಿ
ಇಟ್ಟುಕಟ್ಟಿ ನಡುದಾರಿ ಮೆಟ್ಟಿ ಓಕಳಿಯ ಕಟ್ಟಿ
ಕಾಮರನ ಕಾಣುತ ಬೆದರಿಕಿ ಬಂದಿತು
ಭೂಮಿಪ ಶಿಶುನಾಳಧೀಶನ ಮುಂದ ನಿಂತು || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ಮಳೆ ಹೊಯ್ಯಲಿದೆ
Next post ಕವಲು ದಾರಿ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys